Friday 13 March 2015

ಯುಗಾದಿಗೆ ಹೋಳಿಗೆ ಬೇಕೇ? ಅಥವಾ ಯುಗಾದಿಗೂ ಮೊದಲು ಮತ್ತು ನಂತವರೂ ಬೇಕೇ?



ಕಾಯಿ ಹೋಳಿಗೆ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಚ್ಚು-ಕಮ್ಮಿ ಗಣಪ ಮೆಲ್ಲುವ ತೊಟ್ಟಿನ ಮೋದಕದ ರುಚಿಯಷ್ಟೇ ಸ್ವಾದವಿರುವ ಕಾಯಿ ಹೋಳಿಗೆಯನ್ನು ಬಾಯಲ್ಲಿ ಬಿಟ್ಟುಕೊಳ್ಳುತ್ತಿದ್ದರೆ ಹೊಟ್ಟೆಗೆ ಜಾರಿದ್ದೇ ತಿಳಿಯೋದಿಲ್ಲ; ಹೊಟ್ಟೆ ತುಂಬುವಷ್ಟು ತಿಂದರೂ ಮತ್ತೆ ಬೇಕೆನ್ನುವ ತಕರಾರು ನಾಲಿಗೆಯದ್ದು! ಸ್ವಾದಿಷ್ಟವಾದ ಕಾಯಿ ಹೋಳಿಗೆ ತಯಾರಿಸುವುದು ಎಲ್ಲರಿಗೂ ಕರಗತವಲ್ಲ; ಮಾಡುವ ವಿಧಾನ ಕೇಳಲು ಬಹಳ ಸುಲಭ; ಹದ ತಪ್ಪಿದರೆ ಮಾತ್ರ ಅದರ ರುಚಿ ಅಷ್ಟಕ್ಕಷ್ಟೆ. 

ತೆಂಗಿನ ಕಾಯಿ, ಕೊಬ್ಬರಿ, ಗೋಧಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ,  ಯಾಲಕ್ಕಿ,  ಗಸಗಸೆ, ಎಣ್ಣೆ/ತುಪ್ಪ ಇವಿಷ್ಟನ್ನು ಇಟ್ಟುಕೊಂಡರೆ ಗೊತ್ತಾದ ಪ್ರಮಾಣದಲ್ಲಿ-ಕ್ರಮದಲ್ಲಿ ಮಿಶ್ರಣ ಮಾಡಿ ರೆಡಿ ಮಾಡಬಹುದು.

ಕಾಯಿ ತುರಿಯನ್ನು ನೀರು ಸೇರಿಸದೇ ರುಬ್ಬಿ ಬೆಲ್ಲ ಸೇರಿಸಿ ಬಾಣಲೆಯಲ್ಲಿ ಬಾಡಿಸಿ ಏಲಕ್ಕಿ ಪುಡಿ, ಒಣಕೊಬ್ಬರಿ ಬೆರೆಸಿ ಸಾಮಾನ್ಯ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ. ಗೋಧಿ ಮತ್ತು ಮೈದಾ ಹಿಟ್ಟನ್ನು ಎಣ್ಣೆ ಹಾಕಿ ಹದವಾಗಿ ಕಲಸಿಕೊಂಡು, ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿ ಆಕಾರದಲ್ಲಿ ಹಿಡಿದುಕೊಂಡು ಹೂರಣದ ಉಂಡೆಯನ್ನು ತುಂಬಿ, ನಂತರ ಉಂಡೆ ಎಲ್ಲಾ ಭಾಗದಲೂ ಅದೇ ಹಿಟ್ಟಿನಿಂದ ಮುಚ್ಚುವಂತೆ ಮಾಡಬೇಕು. ಕಣಕ ಸೇರಿದ ಹೂರಣದ ಉಂಡೆಯನ್ನು ಲಟ್ಟಿಸಿ ಕಾದ ಕಾವಲಿಯ ಮೇಲೆ ತುಪ್ಪ/ಎಣ್ಣೆ ಬಳಸಿ ಬೇಯಿಸಬೇಕು.

ಕಾಯಿ ಹೋಳಿಗೆಯನ್ನು ಎರಡು ಮೂರು ವಿಧಾನದಲ್ಲಿ ಅಂದರೆ ಬೆಲ್ಲದ ಬದಲಿಗೆ ಸಕ್ಕರೆ ಮತ್ತು ಗೋದಿ ಹಿಟ್ಟಿನ ಬದಲಿಗೆ ಚಿರೋಟಿ ರವಾ ಸೇರಿಸಿ ತಯಾರಿಸುವವರೂ ಇದ್ದಾರೆ. ತಯಾರಿಸುವ ಗೋಜಲು ಬೇಡವೆಂದುಕೊಳ್ಳುವವರು ಭಟ್ ಹೋಳಿಗೆ ಮನೆಯನ್ನು ಸಂಪರ್ಕಿಸಿ ಕುಳಿತಲ್ಲೇ ತರಿಸಿಕೊಳ್ಳುತ್ತಾರೆ. 

ಈಗ ಸ್ವಲ್ಪ ಭಿನ್ನ ವಿಧಾನದಲ್ಲಿ ಕಾಯಿ ಹೋಳಿಗೆ ತಯಾರಿಸುವುದನ್ನು ತಿಳಿಯೋಣ:

ಮನೆಯಲ್ಲೇ ಸ್ವಲ್ಪ ಮಾತ್ರ ತಯಾರಿಸುವವರು ಸಣ್ಣಗೆ ತುರಿದ ಒಂದು ತೆಂಗಿನಕಾಯಿ, ಮುನ್ನೂರು ಗ್ರಾಂ ನಷ್ಟು ಬೆಲ್ಲ, ಒಂದೇ ಒಂದು  ಟೀ ಸ್ಪೂನ್ ಯಾಲಕ್ಕಿ ಪುಡಿ ಮತ್ತು  ಎರಡು ಟೀ ಸ್ಪೂನ್ ಅಕ್ಕಿ ಹಿಟ್ಟು ಇವಿಷ್ಟನ್ನು ಒಂದೆಡೆ ಇಟ್ಟುಕೊಳ್ಳಿ.

2 ಕಪ್ ಮೈದಾ ಹಿಟ್ಟು,  1 ಕಪ್ ಚಿರೋಟಿ ರವಾ, ಒಂದು ಟೀ ಸ್ಪೂನ್ ಅರಸಿನ ಪುಡಿ ಮತ್ತು  ಸ್ವಲ್ಪ  ತುಪ್ಪ/ಎಣ್ಣೆ  ಇವಿಷ್ಟನ್ನು ಕಣಕ ತಯಾರಿಸಲೆಂದು ರೆಡಿ ಮಾಡಿಕೊಳ್ಳಿ.

ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಹಾಕಿ ಗಿರಗಿರನೆ ಎರಡು ಸುತ್ತು ತಿರುಗಿಸಿಟ್ಟುಕೊಳ್ಳಿ. ಒಂದು ಕಾವಲಿಯಲ್ಲಿ ತಿರುಗಿಸಿ ತೆಗೆದ ಕಾಯಿ ತುರಿ, ಬೆಲ್ಲ ಸೇರಿಸಿ ಪಾಕ ಬರುವವರೆಗೆ ಕೆದಕುತ್ತಿರಿ. ಪಾಕ ಸಿದ್ಧಗೊಂಡ ನಂತರ ಯಾಲಕ್ಕಿ ಪುಡಿ, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಗೊಟಾಯಿಸಿಕೊಳ್ಳಬೇಕು. ನಂತರ ಸ್ಟವ್ ಆರಿಸಿ ಮಿಶ್ರಣ ತಣಿಯಲು ಬಿಡಿ. ತಣಿದ ಮಿಶ್ರಣವನ್ನು ನಿಂಬೆಯ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ.

ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಚಿರೋಟಿ ರವಾ , ಅರಶಿನ ಪುಡಿ, ಎಣ್ಣೆ  ಸೇರಿಸಿ ಸ್ವಲ್ಪವೇ ಸ್ವಲ್ಪ ನೀರು ಹಾಕುತ್ತ ಕಲಸಿಕೊಳ್ಳಿ. ಹಿಟ್ಟು ದೋಸೆ ಹಿಟ್ಟಿನಂತೆ ಜೋನಿಯಾಗದೆ ಚಪಾತಿ ಹಿಟ್ಟಿನ ಹದಕ್ಕಿರಲಿ. ಈ ಮಿಶ್ರಣವನ್ನು ಅರ್ಧ ಘಂಟೆ ಹಾಗೇ ಬಿಡಿ.

ನಾದಿದ ಕಣಕದ ಹಿಟ್ಟನ್ನು ಗೋಲಿ ಗಾತ್ರದಲ್ಲಿ ಉಂಡೆಮಾಡಿ ಕೈಗೆ ಎಣ್ಣೆ ಸವರಿಕೊಂಡು, ಕಣಕದ ಉಂಡೆಯನ್ನು ಬಟ್ಟಲೊಳಗಿನ ಹಳ್ಳದ ಆಕಾರಕ್ಕೆ ತಂದುಕೊಂಡು ನಡುವೆ ಹೂರಣದ ಉಂಡೆ ಇರಿಸಿ ತಿರುಗಿಸಿ ಭದ್ರವಾಗಿ ಮುಚ್ಚಿರಿ.

ಹೂರಣ ತುಂಬಿದ ಕಣಕದ ಉಂಡೆಗಳನ್ನು ಒಂದೊಂದರಂತೆ ತೆಳ್ಳಗೆ ಲಟ್ಟಿಸಿ ಕಾದ ತವದ ಮೇಲೆ ಹಾಕಿ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ ಆರಲು ಬಿಡಿ.

ಕಾಯಿ ಹೋಳಿಗೆ ತಯಾರಿಸಲು ಸುಮಾರು ಒಂದು ಘಂಟೆಯ ಅವಧಿ ಬೇಕು. ಸರಿಯಾಗಿ ಸಿದ್ಧಗೊಂಡ ಕಾಯಿ ಹೋಳಿಗೆಗಳು ಎಂಟು ದಿನಗಳಾದರೂ ಚೆನ್ನಾಗಿರುತ್ತವೆ.

ನೀವು ಬೆಂಗಳೂರಿಗರಾದರೆ, ಕುಳಿತಲ್ಲೇ ಅರ್ಜೆಂಟಾಗಿ ಕಾಯಿ ಅಥವಾ ಬೇಳೆ ಹೋಳಿಗೆ, ಕಜ್ಜಾಯ ಇತ್ಯಾದಿ ತಿನಿಸುಗಳು ಬೇಕೆಂದರೆ ಮೊಬೈಲ್ ಹಿಡಿದು ಕೊಂಡು ಕೆಳಗಿನ ನಂಬರ್ ಒತ್ತಿ: 9901427992
ಭಟ್ ಹೋಳಿಗೆಮನೆ,

# 8,.[ಹೊಸ ನಂ.27, 8ನೇ ಮುಖ್ಯರಸ್ತೆ, ಮಹಾಬಲೇಶ್ವರ ದೇವಸ್ಥಾನದ ಹತ್ತಿರ, ಗಣೇಶ ಬ್ಲಾಕ್, ಮಹಾಲಕ್ಷ್ಮಿ ಲೇ ಔಟ್, ಬೆಂಗಳೂರು-560096


ಚರದೂರವಾಣಿ: 9901427992   ಸ್ಥಿರದೂರವಾಣಿ:080-23490959
ಈ ಮೇಲ್ : srinivasyadu@gmail.com 


[ಮುಂಗಡ ಆರ್ಡರ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ, ಎಷ್ಟೇ ಪ್ರಮಾಣದಲ್ಲಿ ಹೋಳಿಗೆ ಬೇಕಾದರೂ ಒದಗಿಸಲಾಗುತ್ತದೆ.]



Friday 9 January 2015

ಭಟ್ ಹೋಳಿಗೆ



’ಮೈಸೂರು ಮಲ್ಲಿಗೆ’ಯ ಪ್ರಸಿದ್ಧ ಕವಿ ದಿ. ಕೆ.ಎಸ್.ನರಸಿಂಹ ಸ್ವಾಮಿಯವರು ಬರೆಯುತ್ತಾರೆ:

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿನ್ನಿಲ್ಲದ ಕೋಪ.

ಅದೊಂದು ಕಾಲಘಟ್ಟದಲ್ಲಿ ಮನೆಮನೆಗಳಲ್ಲಿ ಯಾವುದೇ ಹಬ್ಬ ಜರುಗಿದರೂ ಸಾಮಾನ್ಯವಾಗಿ ಹೋಳಿಗೆಯನ್ನು/ಒಬ್ಬಟ್ಟನ್ನು ತಯಾರಿಸಲಾಗುತ್ತಿತ್ತು. ಅಧುನಿಕ ಕಾಲಮಾನದಲ್ಲಿ ಬಹುತೇಕ ನಗರವಾಸಿಗಳ ಮನೆಗಳಲ್ಲಿ ಗಂಡನಂತೆ ಹೆಂಡತಿಯೂ ಹೊರಗಡೆ ಕಚೇರಿಯ ಕೆಲಸಗಳಿಗೆ ಹೋಗುವುದರಿಂದ ಇಂದು ಬೇಕೆನಿಸಿದಾಗಲೆಲ್ಲಾ ಹೋಳಿಗೆಗಳನ್ನು ತಯಾರಿಸಿಕೊಳ್ಳಲು ಸುಲಭವಾಗಿ ಸಾಧ್ಯವಾಗುತ್ತಿಲ್ಲ. ಸಮಯದ ಅಭಾವ, ಕೆಲಸಗಳ ಒತ್ತಡ, ಅಗತ್ಯ ಸಾಮಗ್ರಿಗಳು ಸಮಯದಲ್ಲಿ ಒದಗದೇ ಇರುವುದು, ದೈಹಿಕ ಅಶಕ್ತಕೆ, ಮೂಡ್ ಇಲ್ಲದಿರುವಿಕೆ ಇವೆಲ್ಲ ಕಾರಣಗಳಿಂದ ಇಂದು ಹೋಳಿಗೆಯಂತಹ ತಿನಿಸುಗಳನ್ನು ಮನೆಗಳಲ್ಲಿ ತಯಾರಿಸಿಕೊಳ್ಳಲಾಗದವರು ’ಭಟ್ ಹೋಳಿಗೆ’ಗೆ ಮೊರೆಹೋಗುತ್ತಾರೆ.

ಕೇವಲ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಸಿದ್ಧಗೊಳ್ಳುತಿದ್ದ ಹೋಳಿಗೆಗೆ ಪ್ರಥಮವಾಗಿ ಕೈಗಾರಿಕೋದ್ಯಮದ ಆಯಾಮ ಕೊಟ್ಟವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ಶ್ರೀನಿವಾಸ್ ಅವರು. ಮೈಸೂರು ಲ್ಯಾಂಪ್ ಉದ್ಯೋಗಿಯಾಗಿದ್ದ ಶ್ರೀನಿವಾಸ್ ಅವರಿಗೆ ಆ ಕಾರ್ಖಾನೆ ಮುಚ್ಚಿದಮೇಲೆ ಉದ್ಯೋಗಕ್ಕಾಗಿ ಬೇರೆ ಇಂಡಸ್ಟ್ರಿಗಳಿಗೆ ಅಲೆದಾಡುವ ಮನಸ್ಸಿರಲಿಲ್ಲ.  ಹೋಳಿಗೆ, ಕಜ್ಜಾಯ, ಕರಜೀಕಾಯಿ ಮೊದಲಾದ ತಿನಿಸುಗಳಲ್ಲಿ ನೈಪುಣ್ಯತೆ ಹೊಂದಿದ್ದ ಅವರು ತಾನೇಕೆ ಅಂಥದ್ದನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟಮಾಡಬಾರದು? ಎಂಬ ಆಲೋಚನೆ ಹುಟ್ಟಿತು. ಅದರ ಫಲವಾಗಿ ಆರಂಭಗೊಂಡಿದ್ದೇ ಭಟ್ ಹೋಳಿಗೆ ಮನೆ. ಶುಚಿರುಚಿಯಾಗಿ, ಆಯ್ದ ಉತ್ತಮ ಸಾಮಗ್ರಿಗಳನ್ನಷ್ಟೇ ಬಳಸಿ, ಮನೆಯಲ್ಲಿ ಅಮ್ಮ ತಯಾರಿಸುವಷ್ಟೇ ಕಾಳಜಿಯಿಂದ ಹೋಳಿಗೆಯಂತಹ ತಿನಿಸುಗಳನ್ನು ತಯಾರಿಸ ಹತ್ತಿದರು. ಆರಂಭದ ದಿನಗಳಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ನಿರ್ವಹಿಸಬೇಕಾದ ಪ್ರಮೇಯವಿತ್ತು; ಯಾಕೆಂದರೆ ಹೋಳಿಗೆ ಎಂಬುದು ಮಾರುಕಟ್ಟೆಯಲ್ಲಿ ದೊರೆಯುತ್ತದೆಂದು ಯಾರಿಗೂ ತಿಳಿದಿರಲಿಲ್ಲ. ತಯಾರಿಸುವುದನ್ನಂತೂ ಹೇಗೋ ಮಾಡಬಹುದು, ಆದರೆ ಮಾರುಕಟ್ಟೆಯಲ್ಲಿ ಹೇಗೆ ಎಲ್ಲೆಡೆಗೆ ತಲ್ಪಿಸುವುದು, ಹೇಗೆ ಮಾರುವುದು ಎಂಬುದು ಅವರಿಗಿದ್ದ ಸಮಸ್ಯೆ. ಸಿಹಿತಿನಿಸುಗಳನ್ನು ಮಾರುವ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸ್ವೀಟ್ ಮಳಿಗೆಗಳವರು ಹೋಳಿಗೆಯನ್ನು ಮಾರಾಟಮಾಡುವುದಕ್ಕೆ ತೀರಾ ಮನಸ್ಸು ಮಾಡುತ್ತಿರಲಿಲ್ಲ. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಬೆಂಗಳೂರು ಮಹಾನಗರದ ಹಲವು ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗಳನ್ನು ಸುತ್ತಿ ಹಲವು ಅಂಗಡಿಗಳನ್ನು ಏಜೆಂಟರಾಗುವಂತೆ ಕೇಳಿಕೊಂಡರು. ನಿರಂತರ ನಡೆದ ಈ ಅಭಿಯಾನಕ್ಕೆ ತಕ್ಕಮಟ್ಟಿಗೆ ಫಲಶ್ರುತಿ ದೊರೆಯತೊಡಗಿದಾಗ ಆತ್ಮವಿಶ್ವಾಸ ಹೆಚ್ಚಿತು. ಇದೇ ವೃತ್ತಿಯಲ್ಲಿ ತನ್ನ ಬದುಕನ್ನು ಕಟ್ಟಿಕೊಂಡ ಅವರು ಇಂದು ಹಲವಾರು ಕೈಗಳಿಗೆ ಕೆಲಸ ನೀಡಿದ್ದಾರೆ.

ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು,  ಸಕ್ಕರೆಯ ಬದಲಿಗೆ ಪರಿಶುದ್ಧ ಬೆಲ್ಲ, ಉತ್ತಮ ತೆಂಗಿನಕಾಯಿ, ಬೇಳೆ, ಶೇಂಗಾ, ಖರ್ಜೂರ ಮೊದಲಾದವುಗಳನ್ನು ಬಳಸಿ ಹೋಳಿಗೆಯನ್ನು ತಯಾರಿಸುತ್ತಾರೆ. ’ಭಟ್ ಹೋಳಿಗೆಮನೆ’ಯಲ್ಲಿ ತಯಾರಾಗುವ ಕಜ್ಜಾಯಗಳೂ ಕೂಡ ವಿಶಿಷ್ಟವಾಗಿಯೇ ಇರುತ್ತವೆ. ಒಮ್ಮೆ ’ಭಟ್ ಹೋಳಿಗೆಮನೆ’ಯ ಗ್ರಾಹಕರೊಬ್ಬರ ಮನೆಗೆ ಮುಂಬೈನಿಂದ ನೆಂಟರೊಬ್ಬರು ಬಂದಿದ್ದರಂತೆ; ಮನೆಯಲ್ಲಿ ತಯಾರಿಸಿದ ಸಿಹಿ ತಿನಿಸುಗಳ ಜೊತೆಗೆ ಅವರು ಭಟ್ ಹೋಳಿಗೆಮನೆಯ ಹೋಳಿಗೆಗಳನ್ನೂ ಬಡಿಸಿದರು. ಕಾಯಿ ಹೋಳಿಗೆಯ ರಸದೌತಣವನ್ನು ಮೆದ್ದು ಆನಂದತುಂದಿಲರಾದ ಆ ಅತಿಥಿ ಈಗಲೂ ಮುಂಬೈಗೆ ಹೋಳಿಗೆ ಕಳಿಸುವಂತೆ ಬುಲಾವ್ ಮಾಡುತ್ತಾರಂತೆ.

ಅಂದಹಾಗೆ ಆಗಾಗ ಟಿವಿ ಅಡುಗೆ ಶೋಗಳಲ್ಲಿ ಅನೇಕ ಹೆಂಗಸರು ಹೋಳಿಗೆ ಮಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ ಅವರೆಲ್ಲರ ಹೋಳಿಗೆಯನ್ನು ತಿಂದ ಮೇಲೆ ಭಟ್ ಹೋಳಿಗೆಮನೆಯ ಹೋಳಿಗೆಯನ್ನೂ ಒಮ್ಮೆ ತಿಂದು ನೋಡಿ. ಶ್ರೀನಿವಾಸ್ ಅವರ ಹದಪಾಕದ  ಹೋಳಿಗೆಯ ರುಚಿ ಅದ್ಭುತ. ಪರೀಕ್ಷಾರ್ಥವಾಗಿ ನಾವು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಯಾರ್‍ಯಾರೋ ತಯಾರಿಸುವ ಹೋಳಿಗೆಗಳನ್ನು ಖರೀದಿಸಿ ರುಚಿ ನೋಡಿದ್ದೇವೆ. ಕೆಲವು ಹೈಜೀನಿಕ್ ಆಗಿರದಿದ್ದರೆ ಇನ್ನು ಕೆಲವು ಸಪ್ಪೆ ಸಪ್ಪೆ, ಕೆಲವು ಹಿಟ್ಟಿನ ವಾಸನೆಯಾದರೆ ಇನ್ನೂ ಕೆಲವು ಸರಿಯಾಗಿ ಬೆಂದಿರುವುದಿಲ್ಲ. ಭಟ್ ಹೋಳಿಗೆಯ ಮನೆಯಲ್ಲಿ ಹೋಳಿಗೆ ತಯಾರಾಗುವ ಪ್ರತೀ ಹಂತದಲ್ಲೂ ಅದಕ್ಕೆ ನಿಗದಿತ ಸಮಯ ಮತ್ತು ಸಂಸ್ಕರಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಯಾವೊಂದು ಹೋಳಿಗೆಯೂ ಅರ್ಧ ಬೆಂದ ಸ್ಥಿತಿಯಲ್ಲೋ ಅಥವಾ ಕಳಪೆ ಗುಣಮಟ್ಟದಿಂದಲೋ ಬಾಧಿತವಾಗಿರುವುದಿಲ್ಲ. ಆಯಾಯ ದಿನಗಳಂದೇ ಫ್ರೆಶ್ ಆಗಿ ಮಾರುಕಟ್ಟೆಗೆ ತಲ್ಪಿಸುವ ಹೊಣೆಗಾರಿಕೆಯನ್ನೂ ನಿರ್ವಹಿಸುವ ಶ್ರೀನಿವಾಸ್ ಅವರು, ತಮ್ಮ ತಯಾರಿಕೆಯ ಯಾವುದೇ ತಿನಿಸುಗಳಿಗೆ, ಅನೇಕ ದಿನಗಳ ವರೆಗೆ ಕೆಡದಂತೆ ಸಂರಕ್ಷಿಸಲು ಬಳಸುವ ಯಾವುದೇ ರಾಸಾಯನಿಕಗಳನ್ನೂ ಸಹ ಉಪಯೋಗಿಸುವುದಿಲ್ಲ.  "ಇಂದೇ ಡ್ರಾ ಇಂದೇ ಬಹುಮಾನ" ಎಂಬಂತೆ ಅವತ್ತಿನ ದಿನದ ತಯಾರಿಕೆ ಅವತ್ತೇ ಮಾರುಕಟ್ಟೆಯನ್ನು ತಲ್ಪುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಹೋಳಿಗೆಯನ್ನು ಕೇವಲ ಯುಗಾದಿಗೊಮ್ಮೆ ನೆನಪಿಸಿಕೊಳ್ಳುತ್ತಿದ್ದ ಅನೇಕರು ಇಂದು ವೀಕೆಂಡ್‍ಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ, ಬಫೆಗಳಿಗೆ, ನಾಮಕರಣ-ಬರ್ತ್ ಡೇ ಮೊದಲಾದ ಕಾರ್ಯಕ್ರಮಗಳಿಗೆ ಭಟ್ ಹೋಳಿಗೆಯ ಮೊರೆ ಹೋಗುತ್ತಿರುವುದನ್ನು ಗಮನಿಸಿದರೆ ಹೋಳಿಗೆಯ ರುಚಿ ಹತ್ತಿಸುವ ಕಲೆ ಶ್ರೀನಿವಾಸರಿಗೆ ಕರಗತವಾಗಿದೆ ಎನ್ನಬಹುದು. ಕಥೆ ಕೇಳುವುದರಿಂದ ನಿಮಗೆ ತಿಂದಷ್ಟು ಮಜಾ ಸಿಗುವುದೇ? ರುಚಿ ಎಂಬುದನ್ನು ಕೇವಲ ಅಕ್ಷರಗಳಲ್ಲಿ ಎಷ್ಟೆಂದು ಬಣ್ಣಿಸಲಾದೀತು? ಇದನ್ನು ನೇರಾ ನೇರ ಅನುಭವಿಸಬೇಕೆಂದರೆ ಈಗಲೇ ನೀವೊಮ್ಮೆ ಭಟ್ ಹೋಳಿಗೆಯನ್ನು ತಿಂದು ನೋಡಬೇಕು. ಎಲ್ಲದಕ್ಕೂ "ಪ್ರೆಸ್ ಒನ್ ಫಾರ್ ಸೇಲ್ಸ್, ಪ್ರೆಸ್ ಠೂ ಫಾರ್ ಪ್ಲಾನ್ಸ್....ಪ್ರೆಸ್ ನೈನ್ ಟೊ ಟಾಕ್ ಟು ಅವರ್ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್’ ಎಂಬ ಕಾಲ್ ಸೆಂಟರ್ ಯುಗದಲ್ಲಿ, ನೇರವಾಗಿ ದೂರವಾಣಿಗೆ ಸಿಗುವ, ದೇಶೀಯ ಸ್ವಾದಿಷ್ಟ, ಪೌಷ್ಟಿಕ, ನೈಸರ್ಗಿಕವಾಗಿ ತಯಾರಿಸಲ್ಪಟ್ಟ ತಿನಿಸುಗಳನ್ನು ತಯಾರಿಸುವ ಶ್ರೀನಿವಾಸ್ ಅವರಂಥವರ ಕೆಲಸ ನಿಜಕ್ಕೂ ಶ್ಲಾಘ್ಯ.

ಭಟ್ ಹೋಳಿಗೆ ಮನೆಯ ಸಂಪರ್ಕ ಮತ್ತು ವಿಳಾಸ ಇಂತಿದೆ:

ಭಟ್ ಹೋಳಿಗೆಮನೆ,
# 8,.[ಹೊಸ ನಂ.27, 8ನೇ ಮುಖ್ಯರಸ್ತೆ, ಮಹಾಬಲೇಶ್ವರ ದೇವಸ್ಥಾನದ ಹತ್ತಿರ, ಗಣೇಶ ಬ್ಲಾಕ್, ಮಹಾಲಕ್ಷ್ಮಿ ಲೇ ಔಟ್, ಬೆಂಗಳೂರು-560096

ಚರದೂರವಾಣಿ: 9901427992   ಸ್ಥಿರದೂರವಾಣಿ:080-23490959
ಈ ಮೇಲ್ : srinivasyadu@gmail.com 

--- ಲೇಖನ ಕೃಪೆ: ಉದ್ದಿಮೆ ಮೀಡಿಯಾ ನೆಟ್‍ವರ್ಕ್ಸ್[UDDIME]